ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಜಾಲಿಗೆ ವಿಶ್ವಬ್ಯಾಂಕ್ ತಂಡ ಭೇಟಿ

ಭಟ್ಕಳ: ಜಾಲಿಗೆ ವಿಶ್ವಬ್ಯಾಂಕ್ ತಂಡ ಭೇಟಿ

Fri, 30 Oct 2009 18:08:00  Office Staff   S.O. News Service
ಭಟ್ಕಳ, ಅಕ್ಟೋಬರ್ 31: ವಿಶ್ವ ಬ್ಯಾಂಕ್ ನೆರವಿನ 4.20 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕಿನ ಜಾಲಿ ಪಂಚಾಯತ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಯೋಜನೆಯನ್ನು ಡಾ.ಸತೀಶ ನೇತೃತ್ವದ ವಿಶ್ವ ಬ್ಯಾಂಕ್ ತಂಡ ಆಗಮಿಸಿ ಪರಿಶೀಲನೆ ನಡೆಸಿತು.

ಈ ಸಂಬಂಧ ಗ್ರಾಮಪಂಚಾಯತದ ಕಡತವನ್ನು ವೀಕ್ಷಿಸಿದ ತಂಡವು ಡಿಸೆಂಬರ್ 31ರೊಳಗೆ ಕಾಮಗಾರಿಯನ್ನು ಪೂರೈಸುವಂತೆ ಸೂಚಿಸಿತಲ್ಲದೇ, ತಪ್ಪಿದ್ದಲ್ಲಿ ಅನುದಾನವನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದೆ. ಜಿಲ್ಲಾ ಜಲನಿರ್ಮಲ ಉಪ ಯೋಜನೆಯ ವ್ಯವಸ್ಥಾಪಕ ಮುಕ್ಖಣ್ಣ ಕರಿಗಾರ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಜಿ.ಭಟ್, ಗ್ರಾಮಪಂಚಾಯತ ಅಧ್ಯಕ್ಷ ಸಿ.ಎಮ್.ದೇವದಾಸ, ಉಪಾಧ್ಯಕ್ಷೆ ನಾದೀನ ಆವುಟೆ, ಆರ್.ಎಮ್.ಇಕ್ಬಾಲ್, ಸಲಾಮ್, ಕೆ.ಸುಲೇಮಾನ್, ಕೃಷ್ಣಕುಮಾರ್, ಆನಂದ ನಾಯ್ಕ, ರೆಹಮತುಲ್ಲಾ, ಪಂಚಾಯತ ಕಾರ್ಯದರ್ಶಿ ಮಾರುತಿ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.


Share: